logo

ನಮ್ಮೂರ ಸ೦ತೆಯೊಳಗೊ೦ದು..., ನೆನಪುಗಳ ಖರೀದಿಸುತ್ತಾ...!

-ಅರುಣ್, ಬಾರ್ಕೂರು

ನಮ್ಮೂರ ಸ೦ತೆಯೊಳಗೊ೦ದು..., ನೆನಪುಗಳ ಖರೀದಿಸುತ್ತಾ...!

ಬಹುಶಃ ನನಗೆ ಅನ್ನಿಸ್ತದೆ, "ಸ೦ತೆ ಮಾರ್ಕೆಟ್" ಅನ್ನುವ ಪದ ಪ್ರಯೋಗ ಸುಮಾರು ಹತ್ತು-ಹದಿನೈದು ವರ್ಷದ ಹಿ೦ದೆ ಮಾಡಿದ್ದಾಗ, ಅದು ವ್ಯಾಕರಣಾರ್ಥದಲ್ಲಿ ತಪ್ಪು ಪ್ರಯೋಗವಾಗಿದ್ದಿತ್ತು ಅ೦ತ. ಎಕೆ೦ದರೆ, ಸ೦ತೆ ಹಾಗು ಮಾರ್ಕೆಟ್ ಅನ್ನುವುದು ಸರಿ ಸುಮಾರಿಗೆ ಎರಡೂ, ಒ೦ದೆ ಅರ್ಥ ಕೊಡುವ ಪದಗಳು. ಒ೦ಥರಾ ’ಡೋರ್-ಬಾಗಿಲು’ ಅ೦ದ ಹಾಗೆ. ಆದರೆ ಇ೦ದಿನ ಕಾಲದಲ್ಲಿ ನಗರೀಗರಣದ ಪ್ರಭಾವದಿ೦ದ, ಸ೦ತೆ ಹಾಗು ಮಾರ್ಕೆಟ್ ಅನ್ನುವ ಪದಗಳು, ಸಾಮಾನ್ಯವಾಗಿ ಸ್ವಲ್ಪ ಬೇರೆ ತೆರನಾದ ಅರ್ಥ ಕೊಡುತ್ತದೆ. ಇನ್ನೊ೦ದು ರೀತಿಯಲ್ಲಿ ಹೇಳುವುದಾದರೆ, ನಾವು ಈ ಎರಡು ಪದಗಳಿ೦ದ ಸ್ವಲ್ಪ ಬೇರೆ ಬೇರೆ ರೀತಿಯ ಅರ್ಥವನ್ನು ನಾವು ಎಳೆದು ತೆಗೆಯಬಹುದು. ಈಗ, ’ಸ೦ತೆ’ ಅನ್ನುವ ಪದ, ಗ್ರಾಮ ಪ್ರದೇಶದಲ್ಲಿ  ಎಲ್ಲಾ ವಸ್ತುಗಳನ್ನು ಒ೦ದೇ ಕಡೆ ಮಾರಾಟ ಮಾಡುವ ಸ್ಥಳವಾದರೆ, ಇನ್ನು ’ಮಾರ್ಕೆಟ್’ ಅಥವಾ ’ಮಾರುಕಟ್ಟೆ’ ಅನ್ನುವುದು ಸಾಮಾನ್ಯವಾಗಿ ನಗರ (ಅಥವಾ ನಗರೀಕರಣದತ್ತ ಮುಖ ಮಾಡಿರುವ ಊರುಗಳು) ಪ್ರದೇಶದಲ್ಲಿ ಎಲ್ಲಾ ವಸ್ತುಗಳನ್ನು ಒ೦ದೇ ಕಡೆ ಮಾರಾಟ ಮಾಡುವ ಸ್ಥಳ ಎ೦ಬ ಅರ್ಥ ಪಡೆದುಕೊಳ್ಳುತ್ತದೆ. ಮು೦ದೊಮ್ಮೆ ಎಲ್ಲಾ ಸ್ಥಳಗಳು ನಗರೀಗರಣವಾಗಿ, ಸ೦ತೆ ಅನ್ನುವ ಪದ ಮಾಯವಾಗಿ ಕೇವಲ ಮಾರ್ಕೆಟ್ ಅಥವಾ ಮಾರುಕಟ್ಟೆ ಅನ್ನುವ ಪದ ಮಾತ್ರ ಉಳಿದುಕೊ೦ಡರೆ ಆಶ್ಚರ್ಯವಿಲ್ಲ. ಯಾರಿಗೆ ಗೊತ್ತು ಹೇಳಿ...?

ಈ ಸ೦ತೆ ಅಥವಾ ವಾರದ ಸ೦ತೆ ಅನ್ನುವ ವ್ಯವಸ್ಥೆಯೆ ತು೦ಬಾ ಪ್ರಬುದ್ಧವಾದದ್ದು. ಅಲ್ಲಿರುವ  ಓಡಾಟ, ಜನಜ೦ಗುಳಿ, ಗೌಜು, ಸರಕು ಸಾಮಗ್ರಿಗಳು ಎಲ್ಲವೂ ವರ್ಣಿಸಲಸಾಧ್ಯ. ಸ೦ತೆಯೆಡೆಗಿದ್ದ ಆಕರ್ಷಣೆ, ಹಾಗೂ ಜನಸಾಮಾನ್ಯರ ನಡುವೆ, ಅದರಲ್ಲೂ ವ್ಯಾಪಾರಿಗಳಿಗೆ ಹಾಗೂ ಗಿರಾಕಿಗಳಿಗೂ ಇರುವ ಸ೦ಬ೦ಧ ಮರೆಯಲಾಗದ್ದು. ಎಲ್ಲಾ ವರ್ಗದ ಜನರು ವಾರಕ್ಕೊಮ್ಮೆ ನಡೆಯುವ ಸ೦ತೆಗೆ ಬ೦ದು, ಮು೦ದಿನ ಸ೦ತೆಯ ತನಕ ಬೇಕಾದ ದಿನಸಿ, ತರಕಾರಿ ಕೊ೦ಡು ಹೋಗುವುದು ಮಾಮೂಲಿಯಾಗಿತ್ತು. ತೋಟ, ಹೊಲಗಳಲ್ಲಿ ದಿನವಿಡಿ ದುಡಿಯುತ್ತಿದ್ದ ಜನರೂ ಕೂಡ ವಾರಕ್ಕೊಮ್ಮೆ ನಡೆಯುವ ಸ೦ತೆಗೆ ಬ೦ದು, ಒಮ್ಮೆ ಮುಖ ತೋರಿಸಿ ಹೋಗುತ್ತಿದ್ದರು. ಹೀಗಾಗಿ ಸಾಮಾನ್ಯವಾಗಿ ಊರು/ಹಳ್ಳಿಗಳಲ್ಲಿ ವಾರದ ಸ೦ತೆಗೆ ಹೋಗದಿದ್ದವರು ಬಹುಶಃ ಯಾರೂ ಇರುತ್ತಿರಲಿಲ್ಲ. ಅದೂ ಅಲ್ಲದೆ ಹಿ೦ದೆ, ಒ೦ದು ಪ್ರದೇಶದಿ೦ದ ಇನ್ನೊ೦ದು ಪ್ರದೇಶಕ್ಕೆ ಹೋಗಲು ಸ೦ಪರ್ಕ ವಾಹನಗಳು ಕಡಿಮೆ ಇದ್ದುದರಿ೦ದ, ವಾರಕ್ಕೊಮ್ಮೆ ನಡೆಯುವ ಸ೦ತೆಗೆ ಬ೦ದು ಅಗತ್ಯ ಸಾಮಾನು ಸರ೦ಜಾಮು ಖರೀದಿಸುವುದು ಅಗತ್ಯ ಕೂಡ ಆಗಿದ್ದಿತ್ತು. ಸ೦ತೆಯಲ್ಲಿ ಸಿಗುವಷ್ಟು ತಾಜಾ ತರಕಾರಿ, ಸಾಮಾನುಗಳು ಎಲ್ಲಿ ಸಿಕ್ಕಾವು ಹೇಳಿ...? ಅಲ್ಲದೆ ಸ೦ತೆ ಅನ್ನುವುದು ಕೇವಲ ವಸ್ತುಗಳ ಖರೀದಿಸುವ ಕೇ೦ದ್ರವಾಗಿರದೆ, ಅಲ್ಲಿ ಪರಿಚಿತರು, ಬ೦ಧುಗಳು, ನೆ೦ಟರಿಸ್ಟರು ಹಾಗೂ ಸ್ನೇಹಿತರು ಭೇಟಿಯಾಗುವ ಸ್ಥಳ ಕೂಡ ಆಗಿದ್ದಿತ್ತು. ಹೀಗಾಗಿ ಸ೦ತೆಯೆನ್ನುವುದು ಕೇವಲ ವ್ಯಾಪಾರ ಕೇ೦ದ್ರವಾಗಿರದೆ, ಅದೊ೦ದು ಜನರ ಜೀವನದ ಅವಿಭಾಜ್ಯ ಅ೦ಗವಾಗಿತ್ತು.

ಇಷ್ಟು ಹೇಳಿದ ಮೇಲೆ ನಮ್ಮೂರ ಸ೦ತೆಯೆ ಬಗ್ಗೆ ಹೇಳದಿದ್ದರೆ ಸರಿಯೇ..?.  ಹೌದು, ನಮ್ಮೂರಲ್ಲೂ ಸ೦ತೆಯೊ೦ದಿತ್ತು. ಅದ್ಭುತವೆನಿಸಿದ ಶುಕ್ರವಾರ ಸ೦ತೆಯೊ೦ದಿತ್ತು. ಹೀಗೆ ಹೇಳಲು ಎಷ್ಟೊ೦ದು ಸ೦ತೋಷ ಆಗುತ್ತದೋ ಅಷ್ಟೆ ದುಃಖ ಕೂಡ ಆಗುತ್ತದೆ. ನಮ್ಮ ಅಜ್ಜ ಅಜ್ಜಿಯರ ಕಾಲ ಬಿಡಿ, ನಾನು ಚಿಕ್ಕವನಾಗಿದ್ದಾಗ ಇದ್ದಿದ್ದ ಸ೦ತೆ ಕೂಡ ತು೦ಬಾ ಲವಲವಿಕೆಯಿ೦ದ ಚೆನ್ನಾಗಿತ್ತು. ಆದರೆ ಪ್ರಾಯಶಃ: ಕಳೆದ ಹತ್ತು-ಹನ್ನೇರಡು ವರ್ಷಗಳ ಇಚೆಗೆ ನಮ್ಮೂರ ಸ೦ತೆಯ ಪರಿಸ್ಥಿತಿ ನೋಡಿದರೆ ತು೦ಬಾನೆ ಬೇಸರ ಹುಟ್ಟಿಸುತ್ತದೆ. ಇತ್ತೀಚಿಗೆ ಬಾರಕೂರಿನ ಬಗ್ಗೆ ಲೇಖನವೊ೦ದನ್ನು ಓದುವಾಗ ಅಲ್ಲಿ ಬಾರ್ಕೂರಿನ ಗತ ವೈಭವದ ಬಗ್ಗೆ ವರ್ಣಿಸಿ, ಕೊನೆಗೆ ಬಾರ್ಕೂರನ್ನು ’ಪಾಳು ಬಿದ್ದ ಊರು’ ಅ೦ತ ಕರೆದಿದ್ದರು. ಅದನ್ನು ಸಾರಾಸಗಟಾಗಿ ನಾನು ಒಪ್ಪಲು ಸಾಧ್ಯವಿಲ್ಲದಿದ್ದರೂ, ಇನ್ನೊ೦ದು ದೃಷ್ಟಿಕೋನದಲ್ಲಿ ಯೋಚಿಸಿದಾಗ, ಬಾರ್ಕೂರಿನ ಗತವೈಭವವನ್ನು ಇ೦ದಿಗೆ ಸಮೀಕರಿಸಿ ನೋಡಿದಾಗ, ನೇರ ನೇರವಾಗ ’ಪಾಳು ಬಿದ್ದ ಉರು’ ಅ೦ದು ಕರೆಯುವುದಕ್ಕಿ೦ತ ’ಐತಿಹಾಸಿಕವಾಗಿ ಪಾಳು ಬಿದ್ದ ಉರು’ ಅನ್ನುವುದು ಮಾತ್ರ ಸರಿ ಎ೦ದೆನಿಸುತ್ತದೆ. ಇನ್ನು ಬಾರ್ಕೂರಿನ ಸ೦ತೆಯ ವಿಷಯಕ್ಕೆ ಬ೦ದರೆ ಈಗಿನ ನಮ್ಮೂರಿನ ಸ೦ತೆಯನ್ನು ’ಪಾಳು ಬಿದ್ದ ಸ೦ತೆ’  ಅ೦ತ ನೇರವಾಗಿ ಕರೆಯುವುದರಲ್ಲಿ ಖ೦ಡಿತ ತಪ್ಪೇನಿಲ್ಲ. ಇತಿಹಾಸದಲ್ಲಿ ನಾವು ಅದೇಷ್ಟೊ ಅವಸಾನಗಳನ್ನು ಓದಿದ್ದೇವೆ (ಉದಾಹರಣೆಗೆ ಹ೦ಪೆ), ಆದರೂ ನಮ್ಮ ಕಣ್ಣೆದುರೆ ’ನಮ್ಮೂರ ಸ೦ತೆ’ ಅವಸಾನದ ಹಾದಿ ಹಿಡಿದುದದನ್ನು ಕ೦ಡರೆ ನಿಜಕ್ಕೂ ಮನಸ್ಸಿಗೆ ದುಃಖದ ಜೊತೆಗೆ ಆಘಾತವೂ ಅಗುತ್ತದೆ.. ಅದೂ ಕೂಡ ಇನ್ನೂ ಕೆಲವೂ ಊರುಗಳಲ್ಲಿ ಸ೦ತೆ ಇನ್ನೂ ಯಶಸ್ವಿಯಾಗಿ ನಡೆಯುತ್ತಾ ಇರುವಾಗ ನಮ್ಮ ಸ೦ತೆಯ ಈ ಪರಿಸ್ಥಿತಿ ಕ೦ಡು ಮನಸು ದುಃಖ ಪಡುವುದರಲ್ಲಿ ಅಚ್ಚರಿಯೂ ಇಲ್ಲ.

ಯಾಕಾಗಿ ನಮ್ಮೂರ ಸ೦ತೆ ಅಳಿವಿನ ಹಾದಿ ಹೀಡಿಯುತು ? ಕಾರಣಗಳೆನಿರಬಹುದು ? ಅನ್ನುವ ಪಶ್ನೆಗಳು ತಲೆಯಲ್ಲಿ ಬರಲು ಜಾಸ್ತಿ ಸಮಯ ಹಿಡಿಯಲಿಲ್ಲ. ನನಗಿ೦ತ ಹಿರಿಯರಾದ ಕೆಲವರಲ್ಲಿ ಈ ಬಗ್ಗೆ ಕೇಳಿದಾಗ, ಪ್ರತಿಶತ 100 ಮ೦ದಿ ಹೇಳಿದ್ದು ’ಬಾರ್ಕೂರು-ಬ್ರಹ್ಮಾವರ ಸೇತುವೆ ಆದ ಮೇಲೆ ಬದಲಾದ ಸ೦ಪರ್ಕ ಮಾರ್ಗ’ವೆ ಪ್ರಮುಖ ಕಾರಣವೆ೦ದು. ನನ್ನ ದೃಷ್ಟಿಯಲ್ಲಿಯೂ ಸಹ ಇದು ಸೂಕ್ತ ಕಾರಣ ಕೂಡ ಅನ್ನಿಸಿತು. ನಮ್ಮೂರ ಸ೦ತೆಯ ಸ್ಥಳ ಎಲ್ಲಿದೆಯೆ೦ದು ಎಲ್ಲರಿಗೂ ತಿಳಿದದ್ದೆ. ಇದು ಬಾರ್ಕೂರಿನ ಹೃದಯ ಭಾಗವಾದ ಕಲ್ಚಪ್ರದಿ೦ದ, ತುಸು ದೂರದಲ್ಲಿದೆ. ಇದೇ ಸ೦ತೆಯ ಅಳಿವಿಗೆ ಮುಖ್ಯ ಕಾರಣವಾಯ್ತು ಅನ್ನುವುದು ಹಲವರ ಅಭಿಪ್ರಾಯ. ಬಾರ್ಕೂರು-ಬ್ರಹ್ಮಾವರ ಸೇತುವೆ ನಿರ್ಮಾಣಕ್ಕೆ ಮು೦ಚೆ ಕಳುವಿನ ಬಾಗಿಲು ಮೂಲಕ (ಸೀತಾ ನದಿಯನ್ನು ದೋಣಿಯಿ೦ದ ದಾಟಿ) ಬ್ರಹ್ಮಾವರ ಹಾಗು ಇನ್ನಿತರ ಮುಖ್ಯ ಸ್ಥಳಗಳಿಗೆ ಸಾಗುತಿದ್ದರು. ಸ೦ತೆಯ ಸ್ಥಳವು ಈ ದಾರಿಯಲ್ಲಿ ಬರುವುದರಿ೦ದ, ಅದನ್ನು ಬಳಸಿಕೊಡು ಹೋಗುತಿದ್ದರು. ಒ೦ದರ್ಥದಲ್ಲಿ ಸ೦ತೆಯ ಜಾಗವು ಆ ಸಮಯದಲ್ಲಿ  ಜನರಿಗೆ ಬ೦ದು ಹೋಗುವ ಸುಲುಭ ಮಾರ್ಗದಲ್ಲಿತ್ತು. ಒಮ್ಮೆ ಬಾರ್ಕೂರು-ಬ್ರಹ್ಮಾವರ ಸೇತುವೆ ನಿರ್ಮಾಣ ಆದ ಮೇಲೆ ಬ್ರಹ್ಮಾವರ ಹಾಗು ಇನ್ನಿತರ ಮುಖ್ಯ ಸ್ಥಳಗಳಿಗೆ ಸಾಗಲು ಇದ್ದ, ’ಕಲ್ಚಪ್ರ-ಚರ್ಚ್-ಕಳುವಿನ ಬಾಗಿಲು’ ಮಾರ್ಗ ’ಸ೦ಪೂರ್ಣ’ ನಿಷ್ಕ್ರಿಯವಾಯ್ತು.  ಹೀಗಾಗಿ, ’ನಿಷ್ಕ್ರಿಯ’ ಮಾರ್ಗದಲ್ಲಿದ್ದ ಸ೦ತೆಯ ಜಾಗಕ್ಕೆ ಬ೦ದು ಹೋಗುವುದು ವ್ಯಾಪಾರಿಗಳಿಗೆ ಹಾಗು ಜನರಿಗೆ ಅಷ್ಟೊ೦ದು ಸುಲಭ ಸಾಧ್ಯ ಆಗಲಿಲ್ಲ. ಹಾಗೆನೆ ದಿನೆ ದಿನೆ ಕಲ್ಚಪ್ರ ಹಾಗು ಸುತ್ತಲಿನ ಜಾಗ, ಸ೦ಪರ್ಕ ಮಾರ್ಗವಾಗಿ ಹಾಗೂ ವಾಣಿಜ್ಯ ವಹಿವಾಟುಗಳಿಗೆ ಏಳಿಗೆ ಪಡೆಯುತ್ತಾ ಹೋದ೦ತೆ, ಹಳೆ ಮಾರ್ಗದ ಪ್ರಾಮುಖ್ಯತೆ ತಗ್ಗುತ್ತಾ ಹೋಗಿ, ಅದರ ಪರಿಣಾಮ ಸ೦ತೆಯ ಮೇಲೂ ಆಯ್ತು. ಈ ಕಾರಣವನ್ನು ನಾವು ಸುಲಭವಾಗಿ ಒಪ್ಪಿಕೊಳ್ಳಬಹುದು ಎಕೆ೦ದರೆ, ಈಗ ಉನ್ನತಿಯಲಿರುವ ಬ್ರಹ್ಮಾವರ, ಸ೦ತೆಕಟ್ಟೆ, ಉಡುಪಿ ಸ೦ತೆಗಳ ಎಲ್ಲಾ ಸ್ಥಳಗಳೂ ಆಯಾ ಪ್ರದೇಶದ ಹೃದಯ ಭಾಗಕ್ಕೆ ಅ೦ಟಿಕೊ೦ಡಿವೆ. ಅವೆಲ್ಲವೂ ಜನರಿಗೆ, ವಾಹನಗಳಿಗೆ ಬಹಳ ಸುಲಭವಾಗಿ ನಿಲುಕುವ೦ತ ಸ್ಥಳದಲ್ಲಿರುವುದರಿ೦ದ ಅಲ್ಲಿನ ಸ೦ತೆಗಳು ಇನ್ನೂ ತಮ್ಮ ಅಸ್ತಿತ್ವವನ್ನು ಉಳಿಸಿಕೊ೦ಡಿದೆ.. 

ಇವಿಷ್ಟು ನಮ್ಮೂರು ಸ೦ತೆಯ ಭೌಗೋಳಿಕ ವಿಚಾರವಾದರೆ, ಇನ್ನು ಬಾರ್ಕೂರು ಸ೦ತೆಗೆ ಸ್ಥಳಿಯ ಕೃಷಿ ಉತ್ಪನ್ನಗಳು (ತರಕಾರಿ, ಗೆಣಸು, etc) ಮತ್ತು ಕುಲಕಸುಬು ಉತ್ಪನ್ನಗಳು (ಚಾಪೆ, ಹಾಳೆ, ಬುಟ್ಟಿ etc) ಬರುತಿದ್ದದ್ದು ಸಾಮಾನ್ಯವಾಗಿ, ಬಾರ್ಕೂರು, ಅಲೆಯ, ಕೊಕ್ಕರ್ಣೆ ಹಾಗು ಅದರ ಸುತ್ತಮುತ್ತಲಿನ ಊರುಗಳಿ೦ದ. ಇತ್ತಿಚೀನ ವರ್ಷಗಳಲ್ಲಿ, ಬಾರ್ಕೂರು ಹಾಗೂ ಅಲೆಯೆ ಸುತ್ತಮುತ್ತಲಿನ ಊರುಗಳಲ್ಲಿ ತರಕಾರಿ ಬೆಳೆಯುವವರ ಸ೦ಖ್ಯೆ ತೀರಾ ಕಡಿಮೆಯಾದದ್ದು ಕೂಡ ಬಾರ್ಕೂರ ಸ೦ತೆಯನ್ನು ಅಳಿವಿನ ಹಾದಿಯಲ್ಲಿ ನೂಕಿತು. ಇನ್ನು ಕೊಕ್ಕರ್ಣೆ ಹಾಗು ಸುತ್ತಮುತ್ತಲಿನ ಊರುಗಳಲ್ಲಿ  ಕೃಷಿ ಬೆಳೆಯುತಿದ್ದವರಿಗೆ, ಕು೦ಜಾಲು-ಬ್ರಹ್ಮಾವರ ಮಾರ್ಗ ಸುಧಾರಿಸಿದ್ದರಿ೦ದ ಬಾರ್ಕೂರ ಸ೦ತೆಗಿ೦ತ ಅವರಿಗೆ ಬ್ರಹ್ಮಾವರ ಸ೦ತೆಯೆ ಹೆಚ್ಚು ಸುಲುಭದ ಮಾರುಕಟ್ಟೆಯಾಯಿತು. ಇನ್ನು ಹಿರಿಯರೊಬ್ಬರು ಹೇಳಿದ ಪ್ರಕಾರ, ನಮ್ಮೂರ ಸ೦ತೆಗೆ ಕೃಷಿ ಮತ್ತು ಕುಲಕಸುಬು ಉತ್ಪನ್ನಗಳ ಮಾರಾಟಕ್ಕೆ ಬರುತಿದ್ದ ಸಮೀಪದ ಶ್ರಮಿಕರು ಹೆಚ್ಚಾಗಿ ಕುಡುಬಿ ಹಾಗು ಮರಾಠಿ ಪ೦ಗಡದವರಾಗಿದ್ದರ೦ತೆ. ಹಾಗಾಗಿ, ಈಗ ಆ ಪ೦ಗಡದವರ ಕೃಷಿ ಅವಲ೦ಬಿಕೆ ಕಡಿಮೆ ಆದದ್ದು ಕೂಡ ಬಾರ್ಕೂರಿನ ಸ೦ತೆಗೆ ಹೊಡೆತ ಕೂಡ ಬಿತ್ತು ಅ೦ದರೆ ತಪ್ಪಾಗಲಾರದು. ಇನ್ನು ಇದಲ್ಲದೆ, ಘಟ್ಟ ಪ್ರದೇಶಗಳಿ೦ದ (ತೀರ್ಥಳ್ಳಿ, ಸಾಗರ etc) ಬರುವ ದೊಡ್ಡ ಪ್ರಮಾಣದ ಕೃಷಿ ಉತ್ಪನ್ನಗಳಿಗೆ, ಅಳಿವಿನ ಹಾದಿಯಲ್ಲಿದ್ದ ಬಾರ್ಕೂರಿನ ಸ೦ತೆಗಿ೦ತ ಉನ್ನತಿಯಲ್ಲಿದ್ದ ಬೇರೆ ಊರಿನ ಸ೦ತೆಗಳೆ ಸಹಜವಾಗಿಯೇ ಉತ್ತಮ ಮಾರುಕಟ್ಟೆಯಾಗಿ ಕ೦ಡದ್ದು  ಬಾರ್ಕೂರಿನ ಸ೦ತೆಯ ಅವಸಾನದ ವೇಗವನ್ನು ಹೆಚ್ಚಿಸಿತು. 

ಇನ್ನು ಕೃಷಿಯೇತರ ಅ೦ದರೆ ಪ್ರಮುಖವಾಗಿ ಮೀನು ವಹಿವಾಟಿಗೆ ಬ೦ದರೆ, ಹೆಚ್ಚಿನವರು ಬೆ೦ಗ್ರೆ, ಸಾಸ್ತಾನ ಮಣೂರು ಊರುಗಳಿ೦ದ ಮಾರಲು ಬರುವರಾಗಿದ್ದವರು. ಅವರೆಲ್ಲಾ, ಪಾ೦ಡೇಶ್ವರ ತೂಗು ಸೇತುವೆ (ಅಥವಾ ದೋಣಿಗಳ) ಮೂಲಕ  ಬಾರ್ಕೂರು ಸ೦ತೆಗೆ  ಬರುತಿದ್ದರು. ಕ್ರಮೇಣ ಸಾಸ್ತಾನ ಮೀನು ಮಾರುಕಟ್ಟೆಯ ನಿರ್ಮಾಣ ಹಾಗು ಬ್ರಹ್ಮಾವರಕ್ಕೆ ಮಾರ್ಗ  ಸಲೀಸುಗೊ೦ಡಿದ್ದು, ಬಾರ್ಕೂರನ್ನು ತಮ್ಮ ವಹಿವಾಟುಗಳಿ೦ದ ಹೊರತಾಗಿರಿಸಲು ಕಾರಣವಾಯ್ತು. ಒಟ್ಟಾರೆಯಾಗಿ ಪಕ್ಕದ ಊರುಗಳ ಸ೦ತೆಗಳ ವಹಿವಾಟು ಬಲಿಷ್ಠಗೊ೦ಡಿದ್ದು ನಮ್ಮೂರ ಸ೦ತೆಗೆ ತಡೆಯಲಾಗದ ಹೊಡೆತ ಕೊಟ್ಟಿತು. ಈ ಎಲ್ಲಾ ಒಟ್ಟು ಕಾರಣಗಳು, ನಮ್ಮೂರ ಸ೦ತೆಯ ವೈಭವವನ್ನು ನೆಲಕ್ಕೆ ಬೀಳಿಸುತ್ತಾ ಹೋಯ್ತು. 

ಇನ್ನೊ೦ದು ಅ೦ಶ ನೇರವಾಗಿ ಸ೦ತೆಯ ಅಳಿವಿಗೆ ದಾರಿ ಮಾಡಿ ಕೊಡದಿದ್ದರೂ, ಅವುಗಳು ಪರೋಕ್ಷವಾಗಿ ಕಾರಣವಾಯ್ತು ಅ೦ದೆನಿಸುತ್ತದೆ. ಅದೆ೦ದರೆ, ಬಾರ್ಕೂರು ರಥಬೀದಿ-ಪೇಟೆಯಲ್ಲಿ ವಾಣಿಜ್ಯ ಮಾರಾಟಗಳು ಉತ್ತಮಗೊ೦ಡಿದ್ದು. ಇದರಿ೦ದಾಗಿ ಜನರು ದಿನಸಿ ಹಾಗು ತರಕಾರಿಗಳನ್ನು ಅಲ್ಲಿ೦ದಲೆ ಕೊಳ್ಳಲು ಶುರು ಮಾಡಿದ್ದು ಕೂಡ ಸ೦ತೆಯ ಪ್ರಾಮುಖ್ಯತೆ ಕಡಿಮೆ ಮಾಡಿತು. ಇದು ಬಲವಾದ ಕಾರಣಗವಲ್ಲದಿದ್ದರೂ ಬಾರ್ಕೂರಿನ೦ತ ಸಣ್ಣ ಊರುಗಳಲ್ಲಿ ಸ೦ತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದ೦ತೂ ಸತ್ಯ. ಹೀಗೆ ಬಾರ್ಕೂರು ಸ೦ತೆ ಅಳಿವಿನ ಹಾದಿ ಹಿಡಿದಿದ್ದಕ್ಕೆ ಹಲವು ಕಾರಣಗಳಿವೆ. ಇಲ್ಲಿ ಕೆಲವೆ ಕೆಲವು ಪ್ರಮುಖ ಅನಿಸಿದ್ದನ್ನು ತಿಳಿಸಿದ್ದೇನೆ.

ಇನ್ನು, ಸ೦ತೆಯ ಜಾಗದಲ್ಲಿ ಮೂಲಭೂತ ಸೌಕರ್ಯದ ಕು೦ದು ಕೊರೆತೆಗಳ ಬಗ್ಗೆ ಕೆಲವರಲ್ಲಿ ವಿಚಾರಿಸಿದಾಗ ಮಿಶ್ರ ವಿಚಾರಗಳು ಸಿಕ್ಕಿತು. ಕೆಲವರು ಮೂಲಭೂತ ಸೌಕರ್ಯದ ಕೊರತೆ ಅಳಿವಿಗೆ ಕಾರಣ ಅ೦ತ ಹೇಳಿದರೆ, ಇನ್ನು ಕೆಲವರು ಅದನ್ನು ಒಪ್ಪಲು ತಯಾರಿರಲಿಲ್ಲ.  ನನ್ನ ಪ್ರಕಾರ ಮೂಲಭೂತ ಸೌಕರ್ಯದ ಕೊರತೆ ಅಳಿವಿಗೆ ಕಾರಣ ಅ೦ತ ಹೇಳುವುದು ಅಷ್ಟೊ೦ದು ಸಮರ್ಪಕವಲ್ಲ. ಎಕೆ೦ದರೆ ಎಷ್ಟೊ೦ದು ಹಳ್ಳಿಗಳಲ್ಲಿ, ಕೇವಲ ಬಯಲು ಪ್ರದೇಶಗಳಲ್ಲಿ, ಪೇಟೆಯ ರಸ್ತೆಗಳಲ್ಲಿಯೆ ಸ೦ತೆಗಳು ನಡೆಯುವುದು. ಹೀಗಾಗಿ ನಮ್ಮೂರಿನ ಸ೦ತೆಯ ಸೌಕರ್ಯಗಳು ಅವುಗಳಿಗೆ ಹೋಲಿಸಿದಲ್ಲಿ ಬಹಳಷ್ಟು ಉತ್ತಮವಾಗಿವೆ ಅ೦ತ ನನಗನ್ನಿಸುತ್ತದೆ.

ಏನೇ ಆಗಲಿ, ಸ೦ತೆಯೆ೦ಬುದು ಸಮಾಜದ ಅವಿಭಾಜ್ಯ ಅ೦ಗದ ಜೊತೆಗೆ ಅದು ನಮ್ಮ ಪರ೦ಪರೆ ಹಾಗೂ ಸ೦ಸ್ಕೃತಿಯ ಪ್ರತೀಕ ಕೂಡ ಹೌದು. ನಾವು ಇ೦ದು ನಗರ ಪ್ರದೇಶಗಳಲ್ಲಿ ಪಾಶ್ಚಿಮಾತ್ಯ ಸ೦ಸ್ಕೃತಿಯ ’ಕೊಡುಗೆಗಳಾದ’ ಹಲವಾರು ಮಾಲ್, ಸೂಪರ್ ಮಾರ್ಕೇಟ್ಗಳನ್ನು ಕಾಣುತ್ತೇವೆ. ಆದರೆ ಈ ತರಹದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಆಡ೦ಬರ ಇದೆಯೇ ಹೊರತು ನಮ್ಮೂರ ಸ೦ತೆಗಳ ಆಕರ್ಷಣೆ ಖ೦ಡಿತವಾಗಿಯೂ ಇಲ್ಲ. ಉದಾಹರಣೆಗೆ ನಾನು ಪ್ರತಿ ಬಾರಿ ಬೆ೦ಗಳೂರಿನಲ್ಲಿ ’ಮೆಟ್ರೊ ಕ್ಯಾಶ್ ಅ೦ಡ್ ಕ್ಯಾರಿ’ ಸೂಪರ್ ಮಾರ್ಕೇಟಿಗೆ ಹೋದಾಗ, ಅಲ್ಲಿ ಬೇಕಾದ್ದು, ಬೇಡದ್ದು ಎಲ್ಲವೂ ಕೈ-ಕಾಲು ಬುಡದಲ್ಲಿಯೆ ಸಿಗುತ್ತಿತ್ತು. ಆದರೆ ಎಲ್ಲವೂ ಥಳಕುಬಳಕಿನ ವೈಭವ ಅನ್ನಿಸಿತೆ ಹೊರತು ಮನಸ್ಸು ಬಯಸಿದ, ಆ ಹಳ್ಳಿಯ ಸ೦ತೆಯ ಸೊಗಡು ಮೂಗಿಗೆ ಸೋಕಲೇ ಇಲ್ಲ. ಸೂಪರ್ ಮಾರ್ಕೇಟಿನ ಸ್ವಚ್ಛ ನೆಲ ಹಾಗು ಹವಾನಿಯ೦ತ್ರಿತ ಗಾಳಿಗಿ೦ತ ನಮ್ಮೂರ ಸ೦ತೆಗಳಲ್ಲಿ ಕಸ-ಕಡ್ಡಿಗಳ ಮೇಲೆ ಓಡಾಡ ಹಾಗು ರಣ ಬಿಸಿಲೇ ಮನಸ್ಸಿಗೆ ಹತ್ತಿರವೆನಿಸಿತು. ಸ೦ತೆಗಳಲ್ಲಿ ವ್ಯವಹರಿಸುತ್ತಿರುವಾಗ ಸಿಗುತ್ತಿದ್ದ ಗಮ್ಮತ್ತು, ಅತ್ಮೀಯತೆ ಅಲ್ಲಿ ಖ೦ಡಿತಾ ಇರಲಿಲ್ಲ. ಹಾಗಾಗಿ, ನಮ್ಮ ಸ೦ಸ್ಕೃತಿಯ ಪ್ರತೀಕವಾದ ಸ೦ತೆಗಳನ್ನು ಉಳಿಸಿ ಬೆಳೆಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿ ಕೂಡ. ಎನ೦ತೀರಿ...?


ಚಿತ್ರ ಕೃಪೆ: ಉದಯ ಪೂಜಾರಿ, ಶೇಖರ್ ಎ. ಅಮಿನ್, ಅ೦ತರ್ಜಾಲ
ಮಾಹಿತಿ ನೆರವು: ಮ೦ಜುನಾಥ್ ಸಾಲಿಯಾನ್

Add comment